Current Date 26 Aug, 2026

ದೊಡ್ಡ ಮನಸು ಮಾಡಿ ಬೆನ್ನುನೋವು ಶಸ್ತ್ರ ಚಿಕಿತ್ಸೆಗೆ ಒಳಗಾದ ದರ್ಶನ್,..?

ದರ್ಶನ್ ಅನಾರೋಗ್ಯದ ನೆಪ ಹೇಳಿ ಜೈಲಿಂದ ಹೊರ ಬಂದು 45 ದಿನವಾದರೂ ಕೂಡ ಇನ್ನೂ ಶಸ್ತ್ರ ಚಿಕಿತ್ಸೆ ಆಗಿಲ್ಲ. ದಿನ ನಿತ್ಯ ಇವತ್ತು, ನಾಳೆ ಎಂದು ಮುಂದೂಡುತ್ತಾನೇ ಬಂದಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ, ಮಾಧ್ಯಮದಲ್ಲಿ ಈ ಕುರಿತು ಚರ್ಚೆಯಾಗುತ್ತಿದೆ. ದರ್ಶನ್ ಎಲ್ಲರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದರ ನಡುವೆ ದರ್ಶನ್ ದೊಡ್ಡ ಮನಸು ಮಾಡಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎನ್ನುವ ಬ್ರೇಕಿಂಗ್ ನ್ಯೂಸ್ ಸದ್ಯ ಹೊರ ಬಿದ್ದಿದೆ. ಹೌದು, ಬೇಕು-ಬೇಡದ ನಡುವೆ ದರ್ಶನ್ ನಿನ್ನೆ ಬುಧವಾರ ಗ್ಲೆನೆಗಲ್ಸ್ ಗ್ಲೋಬರ್ ಆಸ್ಪತ್ರೆಯಲ್ಲಿ ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಮಾತು ಸದ್ಯ ಕೇಳಿ ಬರುತ್ತಿದೆ.